ಭಾರತ್ ಬಂದ್ ಹಿನ್ನಲೆ; ಟೀ ಅಂಗಡಿ ಓಪನ್ ಮಾಡಿದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರತಿಭಟನಾಕಾರರು

ಬುಧವಾರ, 8 ಜನವರಿ 2020 (10:26 IST)
ಚಿಕ್ಕಬಳ್ಳಾಪುರ : ಭಾರತ್ ಬಂದ್ ಹಿನ್ನಲೆ ಅಂಗಡಿ ಓಪನ್ ಮಾಡಿದ ಟೀ ಅಂಗಡಿ ಮಾಲೀಕನ ಮೇಲೆ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.



ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದರೂ ಕೂಡ  ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂಪಂಗಿ ವೃತ್ತದಲ್ಲಿ ಟೀ ಅಂಗಡಿ ಮಾಲೀಕನು ಎಂದಿನಂತೆ ತನ್ನ ಟೀ ಶಾಪ್ ಓಪನ್ ಮಾಡಿದ್ದಾನೆ.


ಆ ವೇಳೆ ಅಲ್ಲಿದೆ ಬಂದ ಸಿಪಿಐಎಂ ಮುಖಂಡ ಬಂದ್ ಇದ್ದರೂ ಅಂಗಡಿ ಓಪನ್ ಮಾಡಿದ್ದೀಯಾ ಎಂದ ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆಗ ಅಲ್ಲಿದ್ದ ಗ್ರಾಹಕರು  ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ