ಬಿಜೆಪಿಯಲ್ಲಿ ಲಿಂಗಾಯುತ ನಾಯಕ ಬಿಎಸ್ ವೈನ ಮುಗಿಸಲು ಸಂಚು ಹೂಡಿದ್ದಾರೆ- ಆರ್.ಬಿ.ತಿಮ್ಮಾಪುರ

ಶನಿವಾರ, 28 ಸೆಪ್ಟಂಬರ್ 2019 (11:22 IST)
ಬಾಗಲಕೋಟೆ : ಬಿಜೆಪಿಯಲ್ಲಿ ಲಿಂಗಾಯುತ ನಾಯಕರ ಮುಗಿಸಲು ಷಡ್ಯಂತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.




ಈ ಬಗ್ಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹಾಗೂ ಬಿಎಲ್ ಸಂತೋಷ್ ರಿಂದ ಷಡ್ಯಂತ ನಡೆಯುತ್ತಿದೆ. ಬಿಎಸ್ ವೈ ಮುಖ ನೋಡಿ ಲಿಂಗಾಯುತರು ವೋಟು ಹಾಕಿದ್ದಾರೆ. ನಳೀನ್ ಕುಮಾರ್ ಮುಖ ನೋಡಿ ವೋಟು ಹಾಕಿಲ್ಲ, ಕಟೀಲ್ ಗೆ ಇಲ್ಲಿನವರ ಪರಿಚಯವಿಲ್ಲ.  ಜನಾಶೀರ್ವಾದ ಪಡೆಯದ ಕೆಲವರು ಬಿಜೆಪಿಯಲ್ಲಿ ಕೂತಿದ್ದಾರೆ. ಲಿಂಗಾಯುತ ನಾಯಕ ಬಿಎಸ್ ವೈ ಮುಗಿಸಲು ಸಂಚು ಹೂಡಿದ್ದಾರೆ ಎಂದು ಹೇಳಿದ್ದಾರೆ.


ಇಬ್ಬರ ಸಂಚಿಗೆ ಸಿಲುಕಿ ಬಿಎಸ್ ವೈ ಅಸಹಾಯಕರಾಗಿದ್ದಾರೆ. ಬಹುಮತವಿಲ್ಲದೆ ಬಿಜೆಪಿ ಅಧಿಕಾರಕ್ಕೆ ತರಲು ಬಿಎಸ್ ವೈ ಪ್ರಯತ್ನಿಸಿದ್ದಾರೆ. ಆದ್ರೆ ಬಿಎಸ್ ವೈ ಮುಗಿಸಲು ಸಂತೋಷ್, ಕಟೀಲು ನಿಂತಿದ್ದಾರೆ. ಸಿಎಂ ಯಡಿಯೂರಪ್ಪ ಮೇಲೆ ಡಿಸಿಎಂಗಳನ್ನು ತಂದಿದ್ದಾರೆ. ಇವೆಲ್ಲ ಆಟಗಳನ್ನು ನೋಡಿದ್ರೆ ಇನ್ನೆರಡು ತಿಂಗಳಲ್ಲಿ ಬಿಎಸ್ ವೈ ರನ್ನು ಮುಗಿಸ್ತಾರೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ