ಬಿಗ್ ನ್ಯೂಸ್ : ಭೀಮಾ ತೀರದ ಭಾಗಪ್ಪ ಹರಿಜನ ಮತ್ತೆ ಅರೆಸ್ಟ್
ಭೀಮಾ ತೀರದಲ್ಲಿ ಮತ್ತೆ ಅಪರಾಧ ಚಟುವಟಿಕೆಗಳು ತೆರೆಮರೆಯಲ್ಲಿ ಮುಂದುವರಿದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಮಹಾದೇವ ಸಾಹುಕಾರ, ಲಕ್ಷ್ಮೀಕಾಂತ ಪಾಟೀಲ, ಭಾಗಪ್ಪ ಹರಿಜನ ಹಣ ಕೊಡುವಂತೆ ಬೆದರಿಸಿ ಬೇಡಿಕೆ ಇಟ್ಟಿದ್ದರು ಎಂಬುದಾಗಿ ನಾಮದೇವ ಡಾಂಗೆ ಚಡಚಣ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಮೂವರು ಆರೋಪಿಗಳಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಜಾಮೀನು ಪಡೆದುಕೊಂಡಿದ್ದರೆ, ಭಾಗಪ್ಪ ಹರಿಜನ ಅರೆಸ್ಟ್ ಆಗಿದ್ದಾನೆ. ಲಕ್ಷ್ಮೀಕಾಂತ ಪಾಟೀಲ್ ಈಗಲೂ ತಲೆ ಮರೆಸಿಕೊಂಡಿದ್ದಾನೆ.