ಸರ್ಕಾರಿ ವೈದ್ಯರ ಮುಷ್ಕರ ವಾಪಾಸ್ ಸಾಧ್ಯತೆ

ಭಾನುವಾರ, 23 ಆಗಸ್ಟ್ 2020 (11:02 IST)
ಬೆಂಗಳೂರು : ಹಲವು ಬೇಡಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯರು ನಡೆಸಿದ  ಮುಷ್ಕರವನ್ನು  ವಾಪಾಸ್ ಸಾಧ್ಯತೆ ಇದೆ ಎನ್ನಲಾಗಿದೆ.

ಬೇಡಿಕೆಯಲ್ಲಿ ಯಾವುದೆ ಬದಲಾವಣೆ ಇಲ್ಲ . ಹೋರಾಟದ ಸ್ವರೂಪ ಮಾತ್ರ ಬದಲಾಗಿದೆ. ಪ್ರಶಾಂತ್ ಕುಮಾರ್ ವಿರುದ್ಧ ಕ್ರಮ ಆಗಬೇಕು. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಈಗಾಗಲೇ ಸಿಇಒ ವರ್ಗಾವಣೆ ಆಗಿದೆ. ಪ್ರಶಾಂತ್ ಕುಮಾರ್ ಮೇಲೆ ಎಫ್ ಐಆರ್ ದಾಖಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾಗೇ ಇಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘದಿಂದ ಸಭೆ ನಡೆಸಲಾಗುವುದು. ಬೆಂಗಳೂರಿನ ಮಾಗಡಿ ರಸತೆಯಲ್ಲಿರುವ ಕಚೇರಿಯಲ್ಲಿ ನಡೆಯುವ  ಸಭೆಯಲ್ಲಿ ಐಎಂಎ ಮುಖ್ಯಸ್ಥರು  ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ