ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್; ಕಾಂಗ್ರೆಸ್‍ ನ ಮತ್ತೊಬ್ಬ ಶಾಸಕ ಅತೃಪ್ತರ ಗುಂಪಿಗೆ ಸೇರ್ಪಡೆ

ಶನಿವಾರ, 9 ಫೆಬ್ರವರಿ 2019 (09:26 IST)
ಬೆಂಗಳೂರು : ಕಾಂಗ್ರೆಸ್‍ ನ ಮತ್ತೊಬ್ಬ ಶಾಸಕರು ಅತೃಪ್ತರ ಪಟ್ಟಿಗೆ ಸೇರಿದ ಕಾರಣ, ಅತೃಪ್ತ ಶಾಸಕರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಇದರಿಂದ ಮೈತ್ರಿ ಸರ್ಕಾರದಲ್ಲಿ ಆತಂಕ ಶುರುವಾಗಿದೆ.


ಈಗಾಗಲೇ ಕಾಂಗ್ರೆಸ್‍ ನ ಅತೃಪ್ತ ಶಾಸಕರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ನಾಗೇಂದ್ರ, ಉಮೇಶ್ ಜಾಧವ್ ಹಾಗೂ ಮಹೇಶ್ ಕುಮಟಳ್ಳಿ ಪಕ್ಷದವರ ಮೇಲಿನ ಬೇಸರದಿಂದ ಯಾರ ಕೈಗೂ ಸಿಗದೇ ದೂರ ಉಳಿದಿದ್ದಾರೆ.


ಹಾಗೇ  ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಅವರು ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಪಕ್ಷದಿಂದ ದೂರವಿದ್ದರೂ ಕಳೆದ ಬಾರಿಯ ಸಿಎಲ್‍ ಪಿ ಸಭೆಗೆ ಬಂದು ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದಿದ್ದರು. ಆದರೆ ಇದೀಗ ಬಿಸಿ ಪಾಟೀಲ್ ಅವರು ನಿನ್ನೆ ರಾತ್ರಿ  ಮುಂಬೈನ ರೆಸಾರ್ಟ್ ಗೆ ತೆರಳಿ ಅತೃಪ್ತ ಶಾಸಕರ ಜೊತೆ ಸೇರಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ