ಬೆಂಗಳೂರು ಪಬ್ ಗಲಾಟೆಗೆ ಮತ್ತೊಂದು ಟ್ವಿಸ್ಟ್..!!!

ಶನಿವಾರ, 23 ಅಕ್ಟೋಬರ್ 2021 (15:58 IST)
ಹೆಚ್‌ಎಸ್‌ಆರ್ ಲೇಔಟ್ ಶಿಫ್ಟ್ ಬಾರ್ ಅಂಡ್ ರೆಸ್ಟೋರೆಂಟ್ ಹಲ್ಲೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಶಿಫ್ಟ್ ಬಾರ್ ನಲ್ಲಿ ಗಲಾಟೆ ನಡೆದ ವೇಳೆ ಹಲ್ಲೆ ನಡೆಸಿದ ರಾಹುಲ್ ರಾಜ್ ಗನ್ ಮ್ಯಾನ್ ಗಳ ಜೊತೆಗೆ ಸ್ನೇಹ ಬೆಳೆಸಿದ್ದ, ಹೀಗಾಗಿ ಬೌನ್ಸರ್ ಮತ್ತು ಗನ್ ಮ್ಯಾನ್ ಗಳ ಜೊತೆಗೆ ಬಾರ್ ಗೆ ಬಂದಿದ್ದ ಎಂಬುದು ತಿಳಿದು ಬಂದಿದೆ.
 
ಈ ಧೈರ್ಯದಿಂದಲೇ ರಾಹುಲ್ ಸೂರ್ಯಕಾಂತ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿ ಬೌನ್ಸರ್, ಗನ್ ಮ್ಯಾನ್ ಸೇಫ್ಟಿಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಅಲ್ಲಿಂದ ಓಡಿಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಜಗಳ ವಿಕೋಪದಿಂದ ಸ್ನೇಹಿತರ ನಡುವೆ ಗಲಾಟೆ ಆಗಿತ್ತು ಎನ್ನಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ