ನಮಗೂ ಕುಟುಂಬವಿದೆ, ಜೀವನವಿದೆ ಬ್ಯಾನ್ ಮಾಡ್ಬೇಡಿ: ಬೈಕ್ ಟ್ಯಾಕ್ಸಿವಾಲಗಳ ಅಳಲು
ಸುರಕ್ಷತೆ ದೃಷ್ಟಿಯಿಂದ ಮತ್ತು ದುರ್ಬಳಕೆಯಾಗುತ್ತಿದೆ ಎಂಬ ಉದ್ದೇಶಕ್ಕೆ ಬೈಕ್ ಟ್ಯಾಕ್ಸಿ ಸೇವೆನಯನ್ನು ಕರ್ನಾಟಕ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದ ನೂರಾರು ಜನ ಕೆಲಸ ಕಳೆದುಕೊಂಡು ಪರದಾಡುವಂತಾಗಿದೆ. ಹೀಗಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಗೆ ಪತ್ರ ಬರೆದು ನಿಷೇಧ ಹಿಂತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.
ಇಂದೂ ಕೂಡಾ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಹಿಂತೆಗೆದುಕೊಳ್ಳಿ ಎಂದು ಟ್ರೆಂಡ್ ಸೃಷ್ಟಿಯಾಗಿದೆ. ಸರ್ಕಾರವೇನೋ ಒಂದು ಉದ್ದೇಶವಿಟ್ಟುಕೊಂಡು ಬೈಕ್ ಟ್ಯಾಕ್ಸಿ ನಿಷೇಧಿಸಿದೆ. ಆದರೆ ಇದನ್ನೇ ನಂಬಿಕೊಂಡು ಎಷ್ಟೋ ಜನ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅವರ ಜೀವನ ಈಗ ಹಳ್ಳ ಹಿಡಿದಿದೆ.
ಹೀಗಾಗಿ ನಿಷೇಧ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು. ನಮ್ಮ ಕುಟುಂಬವನ್ನು ಬೀದಿಗೆ ತಳ್ಳಬೇಡಿ. ಕರ್ನಾಟಕದಾದ್ಯಂತ ಸುಮಾರು 5,000 ಬೈಕ್ ಟ್ಯಾಕ್ಸಿವಾಲಗಳಿದ್ದಾರೆ. ಅವರೆಲ್ಲರ ಬದುಕು ಈಗ ಅತಂತ್ರ ಸ್ಥಿತಿ ತಲುಪಿದೆ.