‘ಹೆಚ್.ವಿಶ್ವನಾಥ್ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ’

ಶನಿವಾರ, 1 ಫೆಬ್ರವರಿ 2020 (15:56 IST)

ಬಿಜೆಪಿ ಸೇರ್ಪಡೆಗೊಂಡು ಬೈ ಎಲೆಕ್ಷನ್ ನಲ್ಲಿ ಸೋಲು ಕಂಡಿರೋ ಹೆಚ್.ವಿಶ್ವನಾಥ್ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿಯಾಗಿದ್ದಾರೆ.
 

ಹೆಚ್.ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ. ಅವರು ಹಾರುವ ಹಕ್ಕಿ ಅಂತ ಮಾಜಿ ಸಂಸದ ಧ್ರುವನಾರಾಯಣ್ ಲೇವಡಿ ಮಾಡಿದ್ದಾರೆ.

ಬ್ಲ್ಯಾಕ್ ಮೇಲ್ ಮಾಡೋಕೆ ಮುಂದಾಗಿರೋ ಹೆಚ್.ವಿಶ್ವನಾಥ್ ಸಚಿವ ಸ್ಥಾನಕ್ಕಾಗಿ ಏನೂ ಬೇಕಾದ್ರೂ ಮಾಡ್ತಾರೆ. ಈ ಮೊದಲು ಕಾಂಗ್ರೆಸ್ ನಲ್ಲಿ ಸಚಿವರಾಗಿದ್ರು. ಅಲ್ಲಿ ಕೈಬಿಟ್ಟು ಜೆಡಿಎಸ್ ಗೆ ಹೋದ್ರು. ಅಲ್ಲಿ ರಾಜ್ಯಾಧ್ಯಕ್ಷರಾದ್ರು. ಆದರೂ ಅಲ್ಲಿಯೂ ನಿಲ್ಲದ ಹಕ್ಕಿ, ಪುರ್ರಂತ ಹಾರಿ ಇದೀಗ ಬಿಜೆಪಿಗೆ ಬಂದು ಸಚಿವ ಸ್ಥಾನಕ್ಕಾಗಿ ಹಾರಾಡ್ತಿದೆ ಅಂತ ವ್ಯಂಗ್ಯವಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ