ಟಿಕೆಟ್ ಕೊಡಲು ‘ತ್ರೀ’ ಸೂತ್ರಕ್ಕೆ ಬಿಜೆಪಿ ಮೊರೆ

ಸೋಮವಾರ, 30 ಜನವರಿ 2023 (16:06 IST)
ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ತಾಲೀಮು ಆರಂಭವಾಗಿದೆ. ರಾಜ್ಯದಲ್ಲಿ ಈ ಸಲ ಸ್ವಂತ ಬಲದಲ್ಲೇ ಅಧಿಕಾರ ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಭಾಗವಾಗಿಯೇ ಕದನ ಕಲಿಗಳ ಆಯ್ಕೆಗೆ ಬಿಗ್ ಪ್ಲಾನ್ ಹೆಣೆಯಲಾಗಿದೆ.

ಟಿಕೆಟ್ ಹಂಚಿಕೆಗೆ ಬಿಜೆಪಿ 3 ಸೂತ್ರಕ್ಕೆ ಗಂಟು ಬಿದ್ದಿದೆ. ಈ ‘ತ್ರೀ’ ಫಾರ್ಮುಲಾದೊಂದಿಗೆ ಗೆಲ್ಲುವ ಹುರಿಯಾಳುಗಳ ಹುಡುಕಾಟಕ್ಕೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಆ ಮೂರು ಅಗ್ನಿಪರೀಕ್ಷೆಗಳಲ್ಲಿ ಪಾಸಾದ್ರೆ ಮಾತ್ರ ಟಿಕೆಟ್ ಫಿಕ್ಸ್.

ಈ ಬಾರಿ ಭಾರೀ ಎಚ್ಚರದ ನಡೆ ಅನುಸರಿಸಿ ಹುರಿಯಾಳುಗಳ ಆಯ್ಕೆಗೆ ಬಿಜೆಪಿ ಕೈಹಾಕಿದೆ. ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ‘ತ್ರೀ’ ಫಾರ್ಮುಲಾದ ಮೊರೆ ಹೋಗಿದೆ ಬಿಜೆಪಿ. ಹುರಿಯಾಳುಗಳ ಹುಡುಕಾಟಕ್ಕೆ 3 ಪ್ರಮುಖ ವಲಯದಿಂದ ಆಂತರಿಕ ಸಮೀಕ್ಷೆಗೆ ಚಾಲನೆ ಕೊಡಲಾಗಿದೆ. 3 ಹಂತದ ಅಗ್ನಿಪರೀಕ್ಷೆ ಪಾಸಾದವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ