ಭವಾನಿ ರೇವಣ್ಣ ಪಕ್ಷಕ್ಕೆ ತಮಾಷೆಗೆ ಆಹ್ವಾನ ಮಾಡಿದ್ದು ಬಂದು ಟಿಕೆಟ್ ಕೇಳಬೇಡಿ : ಸಿಟಿ ರವಿ

ಶನಿವಾರ, 28 ಜನವರಿ 2023 (18:34 IST)
ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ತಮಾಷೆಗೆ ಆಹ್ವಾನ ಮಾಡಿದ್ದು.ಇನ್ನು ನೀವೇ ಹೇಳಿದ್ದೀರಿ ಎಂದು ನಮ್ಮಲ್ಲಿ ಬಂದು ಟಿಕೆಟ್ ಕೇಳಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇದನ್ನೇ ಗಂಭೀರವಾಗಿ ಪರಿಗಣಿಸಬಾರದು. ನಾನು ತಮಾಷೆಗೆ ಹೇಳಿದ್ದು. ಇನ್ನು ನೀವೇ ಹೇಳಿದ್ದೀರಾ ಎಂದು ಬಂದು ನಮ್ಮಲ್ಲಿ ಟಿಕೆಟ್ ಕೇಳಬೇಡಿ. ನನ್ನ ಬಗ್ಗೆ ಆಕ್ರೋಶ ಭಾವನೆ ಬೇಡ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ. ಅವರ ಹೈಕಮಾಂಡ್ ಅವರ ಮನೆಯಲ್ಲೇ ಇದೆ ಎಂದು ಸ್ಪಷ್ಟನೆ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ