ವೈಯಕ್ತಿಕ ವಿಚಾರಕ್ಕೆ ಬಿಜೆಪಿ ಬಿಟ್ಟಿಲ್ಲ- ಆನಂದಸಿಂಗ್

ಮಂಗಳವಾರ, 6 ಮಾರ್ಚ್ 2018 (07:42 IST)

ಸ್ವಾರ್ಥಿಯಾಗಿದ್ದರೆ ಬಿಜೆಪಿಯಲ್ಲೇ ಇರುತ್ತಿದ್ದೆ, ನಾನು ವೈಯಕ್ತಿಕ ವಿಚಾರಗಳಿಗಾಗಿ ಪಕ್ಷ ಬಿಟ್ಟಿಲ್ಲ ಎಂದು ಮಾಜಿ ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಪಕ್ಷ ದ್ರೋಹಿ ಎಂದು ಶೋಭಾ ಅವರು ಹೇಳಿದ್ದಾರೆ. ಆದರೆ, ಅವರೇ ಪಕ್ಷ ಬಿಟ್ಟು ಹೋಗಿದ್ದು, 6 ಕೋಟಿ ಜನರಿಗೂ ಗೊತ್ತಿದೆ. ಬಿಜೆಪಿ ಮುಗಿಸಲು ಹೋಗಿದ್ದರು. ಪಕ್ಷ ಬಿಟ್ಟು ಹೋದಾಗ ಪಕ್ಷ ದ್ರೋಹ ಆಗರಲಿಲ್ಲವೇ ಎಂಬುದು ಮೊದಲು ಹೇಳಲಿ ಎಂದು ತಿಳಿಸಿದ್ದಾರೆ.

ಮುಂದಿನ ಚುನಾವಣೆಗೆ ನಿನಗೆ ಟಿಕೆಟ್ ನೀಡಲ್ಲ, ಯಾರ ಬಳಿ ಹೋಗಿ ತಗೋತಿಯಾ ಎಂದು ಯಡಿಯೂರಪ್ಪ ಅವರು ಕೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ, ಚುನಾವಣೆಗೆ ಟಿಕೆಟ್ ನೀಡದಿದ್ದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ