ಬಿಜೆಪಿ ಸಚಿವರು, ಡಿಸಿಎಂ ರಾಜೀನಾಮೆ ; ಬಿ.ಎಸ್.ಯಡಿಯೂರಪ್ಪಗೆ ಶುರುವಾಯ್ತು ಚಿಂತೆ

ಸೋಮವಾರ, 27 ಜನವರಿ 2020 (21:21 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗುತ್ತಿರುವಂತೆಯೇ ಸಚಿವರು ಹಾಗೂ ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಸಚಿವರ ಹಾಗೂ ಡಿಸಿಎಂಗಳ ರಾಜೀನಾಮೆ ಪರ್ವ ಶುರುವಾಗಿದೆ. ರಾಜ್ಯ ಸರಕಾರ ಸಂಪೂರ್ಣ ಅವಧಿ ಪೂರೈಸಬೇಕು. ಪಕ್ಷದ ಹೈಕಮಾಂಡ್ ಹಾಗೂ ಸಿಎಂ ಹೇಳಿದರೆ ನಾನು ಡಿಸಿಎಂ ಸ್ಥಾನ ತ್ಯಜಿಸುವೆ. ಹೀಗಂತ ಗೋವಿಂದ ಕಾರಜೋಳ ಹೇಳಿದ್ದಾರೆ.

ಪಕ್ಷದ ವರಿಷ್ಠರು ಹಾಗೂ ಮುಖಂಡರು ಹೇಳಿದಂತೆ ಪಾಲಿಸೋದಾಗಿ ತಿಳಿಸಿದ ಕಾರಜೋಳ, ಮಂತ್ರಿ ಮಂಡಲ ವಿಸ್ತರಣೆಗಾಗಿ ಹಿರಿಯ ಸಚಿವರು ತಮ್ಮ ಸ್ಥಾನಗಳನ್ನು ತೆರವು ಮಾಡಲಿದ್ದಾರೆ ಅನ್ನೋ ಸೂಚನೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ