ಸಿಎಲ್ ಪಿ ಹಾಗೂ ವಿಪಕ್ಷ ಸ್ಥಾನ ಎರಡು ಸಿದ್ದರಾಮಯ್ಯಗೆ ನೀಡಲು ಬೆಂಬಲಿಗರು ಪಟ್ಟುಹಿಡಿದಿದ್ದೇಕೆ?

ಶುಕ್ರವಾರ, 17 ಜನವರಿ 2020 (10:05 IST)
ಬೆಂಗಳೂರು : ಸಿಎಲ್ ಪಿ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಸಿಎಲ್ ಪಿ ನಾಯಕ ಹಾಗೂ ವಿಪಕ್ಷ ಸ್ಥಾನ ಎರಡರಲ್ಲೂ  ಸಿದ್ದರಾಮಯ್ಯ ಅವರನ್ನೇ  ಮುಂದುವರಿಸುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.



ಸಿದ್ದರಾಮಯ್ಯ ಕೇವಲ ವಿಪಕ್ಷ ನಾಯಕರಾಗಿ ಮುಂದುವರಿದ್ರೆ ಕೇವಲ ಸರ್ಕಾರಿ, ಕಾರು, ಬಂಗಲೆಗೆ ಮಾತ್ರ ಸೀಮಿತರಾಗುತ್ತಾರೆ. ಪಕ್ಷದ ಮೇಲೆ ಮೊದಲಿದ್ದ ಹಿಡಿತ ತಪ್ಪುತ್ತದೆ ಎಂಬ ಭೀತಿ ಸಿದ್ದರಾಮಯ್ಯ ಬಣಕ್ಕೆ ಕಾಡುತ್ತಿದೆ. ಹೀಗಾಗಿ ಎರಡೂ ಸ್ಥಾನ ಸಿದ್ದರಾಮಯ್ಯ ಗೆ ನೀಡಲು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.

 

ಒಂದು ವೇಳೆ  ಸಿದ್ದರಾಮಯ್ಯಗೆ 2 ಸ್ಥಾನ ಸಿಗದಿದ್ದರೆ ನೂತನ ಕೆಪಿಸಿಸಿ ಅಧ್ಯಕ್ಷರಿಗೆ ಬೆಂಬಲ ಘೋಷಿಸಿ ತಟಸ್ಥರಾಗಿರಲು ಸಿದ್ದರಾಮಯ್ಯ ಬಣ ಚಿಂತನೆ ನಡೆಸಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ