ಟಿಪ್ಪು ಜಯಂತಿಗೆ ಹೆಣ ಬೀಳಬೇಕಾ ಎಂದ ಬಿಜೆಪಿ ಶಾಸಕ

ಗುರುವಾರ, 1 ಆಗಸ್ಟ್ 2019 (19:27 IST)
ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರೋ ಕ್ರಮಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಮಾಡಿದ್ದರೆ, ಬಿಜೆಪಿ ಶಾಸಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಟಿಪ್ಪು ಜಯಂತಿ ಆಚರಣೆ ರದ್ದು ಗೊಳಿಸಿರೋದು ಸರಿ. ಹೀಗಂತ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಜಯಂತಿ ಆಚರಣೆ ವೇಳೆ ಇನ್ನು ಎಷ್ಟು ಹೆಣಗಳು ಬೀಳಬೇಕಿತ್ತು ಅಂತ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.  

ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ದ್ವೇಷದ ರಾಜಕಾರಣ ಮಾಡಿಲ್ಲ ಎಂದ್ರು.

ಟಿಪ್ಪು ಜಯಂತಿ ಆಚರಣೆ ಹೆಸರಿನಲ್ಲಿ ಹೆಣಗಳು ಉರುಳುತ್ತಿದ್ದವು ಅಂತ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿರೋ ಸಿಎಂ ನಿರ್ಧಾರವನ್ನ ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ