ಪ್ರತಾಪ್ ಸಿಂಹ ಅನಾಗರಿಕ ಮನುಷ್ಯ: ಸಿಎಂ ವಾಗ್ದಾಳಿ

ಶುಕ್ರವಾರ, 7 ಏಪ್ರಿಲ್ 2017 (16:27 IST)
ಬಿಜೆಪಿ ಸಂಸದ ಪ್ರತಾಪ್ ಸಿಂಹ ಓರ್ವ ಅಪ್ರಭುದ್ಧ ಮನುಷ್ಯ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಉಪಚುನಾವಣೆಯ ಪ್ರಚಾರದ ಕೊನೆಯ ದಿನದ ಅಂಗವಾಗಿ ರೋಡ್‌ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ, ಅವನ್ಯಾವನೋ ಪ್ರತಾಪ ಸಿಂಹ್ ಬಾಯಿಗೆ ಬಂದ ಹಾಗೇ ಮಾತಾಡ್ತಾನೆ. ಅವನೊಬ್ಬ ಅಸುಸಂಸ್ಕ್ರತ ರಾಜಕಾರಣಿ ಎಂದು ಟೀಕಿಸಿದರು.
 
ಗುಂಡ್ಲುಪೇಟೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಗೀತಾ ಮಹಾದೇವ್ ಪ್ರಸಾದ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಚುಚ್ಚಿ ಚುಚ್ಚಿ ಮಾತನಾಡುತ್ತಾರೆ. ಇಂತಹ ಸಂಸ್ಕ್ರತಿಯಿರುವ ಬಿಜೆಪಿಗೆ ಓಟ್ ಹಾಕ್ಬೇಕಾ? ಎಂದು ಪ್ರಶ್ನಿಸಿದರು.
 
ಮಹಿಳೆಯರ ಬಗ್ಗೆ ಅಸಭ್ಯವಾಗಿ ವರ್ತಿಸುವ ಸಂಸ್ಕ್ರತಿ ಹೊಂದಿರುವ ಬಿಜೆಪಿ ಪಕ್ಷಕ್ಕೆ ಮತಹಾಕಬೇಕಾ? ನೀವು ಇಂತಹ ಪಕ್ಷಕ್ಕೆ ಮತ ಹಾಕ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಮತದಾರರಿಗೆ ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ