ಬಿಜೆಪಿ ಸರಕಾರ ಉಳಿಬೇಕು ಅಂದ್ರೆ ಅನರ್ಹರು ಗೆಲ್ಲಲೇಬೇಕು ಎಂದ ಸಚಿವ

ಶನಿವಾರ, 23 ನವೆಂಬರ್ 2019 (16:19 IST)
ಭಾರತೀಯ ಜನತಾ ಪಕ್ಷದ ಪಾಲಿಗೆ ಅಥಣಿ ಗಂಡು ಮೆಟ್ಟಿನ ನಾಡು ಆಗಿದೆ. ಹೀಗಂತ ಸಚಿವರೊಬ್ಬರು ಹಾಡಿ ಹೊಗಳಿದ್ದಾರೆ.

ಮಾಜಿ ಸಿಎಂ ಜಗದೀಶ ಶೆಟ್ಟರ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಅಥಣಿಯಿಂದ ಸಿಎಂ ಯಡಿಯೂರಪ್ಪರ ದಂಡ ಯಾತ್ರೆ ಶುರುವಾಗಿದೆ. ದಂಡಯಾತ್ರೆ ಶುರುವಾಗಿ ಕೊನೆಯ ಸಮಾವೇಶ ಅಥಣಿಯಲ್ಲಿ ಮಾಡಲಾಗುವದು.
ದಂಡಯಾತ್ರೆಗೆ ನಿಮ್ಮ ಸಹಕಾರ ಬೇಕು ಎಂದರು.

ಸರ್ಕಾರ ಉಳಿಬೇಕಾದ್ರೆ ಅನರ್ಹ ಶಾಸಕರು ಗೆಲ್ಲಲೆಬೇಕು. ಯಡಿಯೂರಪ್ಪರ ಸ್ಥಿರ ಸರ್ಕಾರ ಮುಂದುವರೆಯಬೇಕಾದ್ರೆ, ಸವದಿ ಡಿಸಿಎಂ ಆಗಿ ಮುಂದುವರೆಯಬೇಕಿದ್ರೆ ಕುಮಟಳ್ಳಿ ಗೆಲ್ಲಬೇಕಿದೆ. ಬಿಜೆಪಿ ಸರ್ಕಾರ ಬಂದಾಗಲೆಲ್ಲ ಜನರಿಗೆ ಒಳ್ಳೆಯದಾಗಿದೆ ಎಂದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ