ಸಿಎಂ ಕುಮಾರಸ್ವಾಮಿಗೆ ಶೃಂಗೇರಿ ಶಾರದಾಂಬೆ ಒಳ್ಳೆ ಬುದ್ಧಿ ಕೊಡಲಪ್ಪಾ..! ಬಿಜೆಪಿ ಟಾಂಗ್

ಶನಿವಾರ, 22 ಸೆಪ್ಟಂಬರ್ 2018 (09:32 IST)
ಬೆಂಗಳೂರು: ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಕುಟುಂಬ ವರ್ಗ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ.

ದೇವೇಗೌಡ ಮತ್ತು ಕುಟುಂಬ ವರ್ಗ ಇಂದು ಬೆಳಿಗ್ಗೆಯೇ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ಬಗ್ಗೆ ಬಿಜೆಪಿ ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದೆ.

‘ಶೃಂಗೇರಿ ಶಾರದಾಂಬೆ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿದೆ. ದಂಗೆ-ದಂದೆಯನ್ನು ಬಿಟ್ಟು, ನೆನಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಭುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಿಲಿ. ಶುಭಪ್ರಯಾಣ ಕುಮಾರಸ್ವಾಮಿಯವರೇ’ ಎಂದು ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ