ಜ್ವರ ಬಂದ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ-ಸಚಿವ ಶ್ರೀರಾಮುಲು ಮನವಿ

ಬುಧವಾರ, 11 ಮಾರ್ಚ್ 2020 (11:18 IST)
ಬೆಂಗಳೂರು : ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಜನತೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮನವಿಯೊಂದನ್ನು ಮಾಡಿದ್ದಾರೆ.


ಜ್ವರ ಬಂದಾಗ ಕ್ರೋಸಿನ್ ಸೇವಿಸಿದ್ರೆ ಕೊರೊನಾ ಸೋಂಕು ಪತ್ತೆಯಾಗಲ್ಲ. ಆದಕಾರಣ ಜನರು ಜ್ವರ ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.


ಅಲ್ಲದೇ ಮಾರ್ಚ್ 1ರಂದು ಟೆಕ್ಕಿ ಕ್ರೋಸಿನ್ ಮಾತ್ರೆ ಸೇವಿಸಿದ್ದರು. ಆದಕಾರಣ ಸೋಂಕು ಇರುವುದು ಪತ್ತೆಯಾಗಿಲ್ಲ. ಮಾರ್ಚ್ 6 ರಂದು ಕೊರೊನಾ ಪಾಸಿಟಿವ್ ಗೊತ್ತಾಗಿದೆ. ಮಾರ್ಚ್ 9ರಂದು ಸೋಂಕಿನ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಟೆಕ್ಕಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ