ಕಳೆದ 20 ವರ್ಷಗಳಿಂದ ಮೈತ್ರಿಕೂಟ ಪಕ್ಷಗಳಾಗಿದ್ದ ಶಿವಸೇನೆ ಮತ್ತು ಬಿಜೆಪಿ, ಇದೀಗ ಮೈತ್ರಿಯನ್ನು ಅಂತ್ಯಗೊಳಿಸಿದೆ.ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮತ್ತೆ ಶಿವಸೇನೆ, ಬಿಜೆಪಿ ಒಂದಾಗುತ್ತವೆಯೋ ಎನ್ನುವುದನ್ನು ಕಾದುನೋಡಬೇಕಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 31 ಸ್ಥಾನ ಗಳಿಸಿದ್ದರೆ, ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ಗೆ 7 ಸ್ಥಾನ, ಪವಾರ್ ನೇತೃತ್ವದ ಎನ್ಸಿಪಿಗೆ 9 ಸ್ಥಾನ ಹಾಗೂ 14 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದಾರೆ.