ಮಳೆ ಇಫೆಕ್ಟ್: ಬಿಎಂಟಿಸಿ ಸಿಬ್ಬಂದಿಗೆ ಎರಡು ದಿನ ರಜೆ

ಬುಧವಾರ, 16 ಆಗಸ್ಟ್ 2017 (11:04 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎರಡು  ದಿನದಿಂದ ಸುರಿದ ಮಳೆಗೆ ಶಾಂತಿ ನಗರ ಬಸ್ ಡಿಪೋದಲ್ಲಿ ನೀರು ನಿಂತ ಪರಿಣಾಮ ಕೆಸರು ಗೆದ್ದೆಯಂತಾಗಿದೆ.

 
ಡೀಸೆಲ್ ಬಂಕ್ ಗೆ ನೀರು ನುಗ್ಗಿ ಬಸ್ ಗಳ ಓಡಾಟಕ್ಕೆ ತೊಡಕಾಗಿದೆ. ಮಳೆಯ ಅವಾಂತರದಿಂದಾಗಿ ಕೆಲಸಕ್ಕೆ ತೊಡಕಾಗಿರುವ ಹಿನ್ನಲೆಯಲ್ಲಿ ಸುಮಾರು 1000 ಬಿಎಂಟಿಸಿ ಸಿಬ್ಬಂದಿಗೆ ರಜೆ ನೀಡಲಾಗಿದೆ.

ಮಳೆಯ ಈ ಅವಾಂತರದಿಂದಾಗಿ ಬಿಎಂಟಿಸಿಗೆ ಅಂದಾಜು 5 ಕೋಟಿ ರೂ. ನಷ್ಟವಾಗಿದೆ ಎಂದು ಇಲಾಖೆ ಹೇಳಿದೆ. ಕಳೆದೆರಡು ದಶಕಗಳಲ್ಲೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ.. ಮತ್ತೆ ಗುಡುಗಿದ ಕಮಲ್ ಹಾಸನ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ