ಆದಿಚುಂಚನಗಿರಿ ಸ್ವಾಮೀಜಿ ಎದುರು ಕೂತ ಅಮಿತ್ ಶಾ ಭಂಗಿ ವಿವಾದದಲ್ಲಿ!

ಸೋಮವಾರ, 14 ಆಗಸ್ಟ್ 2017 (09:14 IST)
ಬೆಂಗಳೂರು: ಬಿಜೆಪಿ ನಾಯಕರ ಜತೆ ಚುನಾವಣಾ ಸಿದ್ಧತೆ ಸಭೆ ನಡೆಸಲು ಬೆಂಗಳೂರಿಗೆ ಬಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ನಿನ್ನೆ ಭೇಟಿಯಾಗಿದ್ದರು.

 
ಆದರೆ ಅವರು ಸ್ವಾಮಿಗಳ ಎದುರು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.

ಶ್ರೀಗಳ ಎದುರು ಅಮಿತ್ ಶಾ ಕಾಲ ಮೇಲೆ ಕಾಲು ಹಾಕಿಕೊಂಡು ಕೂತಿರುವ ಫೋಟೋ ಇದೀಗ ವಿವಾದಕ್ಕೆ ಕಾರಣವಾಗಿದೆ. ಆದರೆ ಈ ಫೋಟೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ.. ಭಾರತೀಯ ಸೇನೆ ಸಹಾಯಕ್ಕೆ ಅಮೆರಿಕಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ