ವೈ.ಎನ್.ಹೊಸಕೋಟೆಯಲ್ಲಿ ಗಡಿ ನುಸುಳುಕೋರರ ಹಾವಳಿ

ಭಾನುವಾರ, 19 ಏಪ್ರಿಲ್ 2020 (10:51 IST)

ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನ  ವೈ.ಎನ್.ಹೊಸಕೋಟೆಯಲ್ಲಿ ಗಡಿ ನುಸುಳುಕೋರರ ಹಾವಳಿ ಹೆಚ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ.

 

ಕೊರೊನಾ ಭೀತಿ ಹಿನ್ನಲೆಯಲ್ಲಿ ಜಿಲ್ಲೆಯ ಗಡಿಗಳನ್ನು ಬಂದ್ ಮಾಡಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಗಡಿಯಲ್ಲಿ ಬೇಲಿ ಹಾಕಿದರೂ ಆಂಧ್ರಪ್ರದೇಶದಿಂದ ಜನರು ವೈ.ಎನ್.ಹೊಸಕೋಟೆ ಗಡಿಯಲ್ಲಿ ನುಸುಳಿ ಬರುತ್ತಿದ್ದಾರೆ ಎನ್ನಲಾಗಿದೆ.

 

ಪ್ರತಿದಿನ ಆಂಧ್ರಪ್ರದೇಶದಿಂದ ಜನರು ರಾಜ್ಯಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ