‘ಹೋಗ್ಬಿಟ್ಯಲ್ಲೇ ಯವ್ವಾ…’ ಬದುಕಿ ಬಾರದ ಕಾವೇರಿಗಾಗಿ ಹೆತ್ತವರ ರೋಧನ

ಮಂಗಳವಾರ, 25 ಏಪ್ರಿಲ್ 2017 (07:26 IST)
ಬೆಳಗಾವಿ: ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಕೊನೆಗೂ ಬದುಕಿ ಬರಲಿಲ್ಲ. ಪೋಷಕರ ಕಣ್ಣೀರಿಗೆ ಕೊನೆಯಿಲ್ಲದಾಯಿತು.

 
ನಿನ್ನೆ ಬೆಳಿಗ್ಗೆ ಕಾವೇರಿ ಸಿಲುಕಿಕೊಂಡಿದ್ದ ಸ್ಥಳದ ಸಮೀಪಕ್ಕೆ ತಲುಪಿದ ರಕ್ಷಣಾ ಸಿಬ್ಬಂದಿಗೆ ದೊಡ್ಡ ಬಂಡೆ ಕಲ್ಲು ಸಿಲುಕಿಕೊಂಡು ರಕ್ಷಣೆಗೆ ಅಡ್ಡಿಯಾಯಿತು. ಇದರಿಂದಾಗಿ ಬಾಲಕಿಯನ್ನು ತಲುಪಲು ಇನ್ನೂ ತಡವಾಯಿತು.

ಕೊನೆಗೂ ಮಧ್ಯರಾತ್ರಿ 11.34 ರ ಸುಮಾರಿಗೆ ಕಾವೇರಿಯನ್ನು ಹೊರಗೆ ಕರೆತರಲು ಸಿಬ್ಬಂದಿ ಯಶಸ್ವಿಯಾದರು. ಆದರೆ ಕೊಳವೆ ಬಾವಿಯಿಂದ ಹೊರ ಬಂದಿದ್ದು, ಆಕೆಯ ಮೃತದೇಹವಾಗಿತ್ತು. ತಂದೆ ಹಾಗೂ ಕುಟುಂಬಸ್ಥರು ‘ನಗ್ತಾ ನಗ್ತಾ ನಮ್ಮ ಕಣ್ಣೆದುರು ಆಡ್ಕೊಂಡಿದ್ಯಲ್ಲೇ.. ಹೋಗ್ಬಿಟ್ಯಲ್ಲೇ..’ ಎಂದು ಅಳುತ್ತಿದ್ದರೆ ನೆರೆದಿದ್ದವರ ಕಣ್ಣು ಹನಿಗೂಡಿದವು. ಅತ್ತ ಕಾವೇರಿಯನ್ನು ಬದುಕಿಸಲಾಗಲಿಲ್ಲ ಎಂದು ಸಿಬ್ಬಂದಿಗಳೂ ಬೇಸರಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ