ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1991 ರಲ್ಲಿ ನಡೆದ ಕಹಿ ಘಟನೆ ನಮ್ಮ ಮುಂದಿದೆ. ವಿವಾದಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಸಾರ್ವಜನಿಕರು ಕಿವಿಗೊಡಬಾರದು. ಈಗಾಗಲೇ ಡಿಜಿಪಿ ಓಂ ಪ್ರಕಾಶ್ ಅವರು ತಮಿಳುನಾಡಿನ ಡಿಜಿ ರಾಜೇಂದ್ರನ್ ಜೊತೆ ಮಾತನಾಡಿದ್ದಾರೆ. ನಾವು ಅಲ್ಲಿಯ ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.