ಅನರ್ಹ ಶಾಸಕರ ಗುಣಗಾನ ಮಾಡಿದ ಬಿ.ಎಸ್.ಯಡಿಯೂರಪ್ಪ

ಶನಿವಾರ, 9 ನವೆಂಬರ್ 2019 (20:25 IST)
ಕೆಲವು ದಿನಗಳಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಅನರ್ಹ ಶಾಸಕರು ಬ್ಯಾಟ್ ಬೀಸುತ್ತಿದ್ದರೆ ಈಗ ಅನರ್ಹ ಶಾಸಕರ ಗುಣಗಾನ ಮಾಡಿದ್ದಾರೆ ಸಿಎಂ.

ಸಿಎಂ ಬಿ.ಎಸ್.ಯಡಿಯೂರಪ್ಪನವರು ಅನರ್ಹ ಶಾಸಕ ನಾರಾಯಣಗೌಡರನ್ನು ಹಾಡಿ ಹೊಗಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳದಲ್ಲಿ ಮಾತನಾಡಿದ ಸಿಎಂ, ನಾರಾಯಣಗೌಡ ಸರಳ, ಸಜ್ಜನಿಕೆ, ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಕೊಂಡಾಡಿದ್ದಾರೆ.

ಕೆ.ಆರ್.ಪೇಟೆ ಅಭಿವೃದ್ಧಿಯ ಕನಸು ಕಂಡಿರೋ ನಾರಾಯಣಗೌಡರಿಗೆ ನಿಮ್ಮ ಆಶೀರ್ವಾದ ಇರಲಿ. ಸಾಧ್ಯವಾದಷ್ಟು ಅಭಿವೃದ್ಧಿಗೆ ಕೈಜೋಡಿಸುವೆ ಅಂತ ಸಿಎಂ ಹೇಳಿದ್ರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ