ಮಧು ಬಂಗಾರಪ್ಪಗೆ ಯಡಿಯೂರಪ್ಪ ತಿರುಗೇಟು

ಶನಿವಾರ, 22 ಜುಲೈ 2017 (11:36 IST)
ಶಿವಮೊಗ್ಗ: ತಮ್ಮ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ಜೆಡಿಎಸ್ ನಾಯಕ ಮಧು ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ಮಧುಬಂಗಾರಪ್ಪ ಯಡಿಯೂರಪ್ಪನವರನ್ನು ಟೀಕಿಸಿದ್ದರು.


ನಿನ್ನೆ ಶಿವಮೊಗ್ಗದಲ್ಲಿ ಮಾತನಾಡಿದ್ದ  ಮಧು ಬಂಗಾರಪ್ಪ ಯಡಿಯೂರಪ್ಪ ‘ಕಚಡಾ ‘ ಮುಖ್ಯಮಂತ್ರಿಯಾಗಿದ್ದರು. ಅವರದ್ದು ರೈತ ವಿರೋಧ ಕೆಟ್ಟ ರಕ್ತ. ದ.ಕ. ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಮಾತನಾಡುವ ಮನಸ್ಥಿತಿಯವರು ಎಂದು ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಧು ಬಂಗಾರಪ್ಪ ಹೇಳಿಕೆ ರಾಜಕೀಯ ಸೇಡಿನಿಂದ ಕೂಡಿದೆ. ನಾನು ಜನರ ಆಶೀರ್ವಾದದಿಂದಲೇ ಮುಖ್ಯಮಂತ್ರಿಯಾಗಿದ್ದೆ. ಅಭಿವೃದ್ಧಿಯಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಅವರು ಮಾತನಾಡಿದ ರೀತಿ ಅವರ ಯೋಗ್ಯತೆ ತಿಳಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ..  ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ