ಬಸ್​ ಚಾಲಕನ ಮೇಲೆ ಕುಡುಕರಿಂದ ಹಲ್ಲೆ

ಮಂಗಳವಾರ, 11 ಜುಲೈ 2023 (16:29 IST)
ಎಣ್ಣೆ ಮತ್ತಿನಲ್ಲಿ ಕಾರಿನಲ್ಲಿದ್ದ ಯುವಕರು ಪುಂಡಾಟವೆಸಗಿ KSRTC ಬಸ್​ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ‌ಹೋರಿತಿಮ್ಮನಹಳ್ಳಿಯಲ್ಲಿ ನಡೆದಿದೆ. ಕಿಡಿಗೇಡಿಗಳು ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್​ ಮೇಲೆ ಬಾಟಲಿ ಎಸೆದು ಬಸ್​ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.. ಇದನ್ನು ಪ್ರಶ್ನೆ ಮಾಡಿದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ಸತೀಶ್ ಹಲ್ಲೆಗೊಳಗಾಗಿದ್ದಾರೆ.. ಹಲ್ಲೆಗೊಳಗಾದ ಡ್ರೈವರ್ ಸತೀಶ್ ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್, ಸತೀಶ್, ಸಚಿನ್, ಸುಪ್ರೀತ್​​ರನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ