ಕ್ಯಾಂಡಿಡೇಟ್ ರಾಕ್ಸ್ ಕೈ ನಾಯಕರು ಶಾಕ್..!

ಭಾನುವಾರ, 20 ನವೆಂಬರ್ 2022 (20:48 IST)
ಟಿಕೇಟ್ ಅರ್ಜಿ ಸಲ್ಲಿಕೆಗೇ ಟಿಕೇಟ್ ಆಕಾಂಕ್ಷಿಗಳು ಭಾರಿ ಶಕ್ತಿಪ್ರದರ್ಶನ ಮಾಡಿದ್ದಾರೆ.ಚುನಾವಣೆಗೆ ನಾಮಪತ್ರ ಸಲ್ಲಿಸುವ ಮಾದರಿಯಲ್ಲೇ  ಟಿಕೇಟ್ ಆಕಾಂಕ್ಷಿ ಧನಂಜಯ್ ಜಿ ಕೆಪಿಸಿಸಿಗೆ ಆಗಮಿಸಿದರು.ಸುಮಾರು ೩೦೦ ಬಸ್ ಗಳಲ್ಲಿ ಟಿಕೇಟ್ ಆಕಾಂಕ್ಷಿ ಧನಂಜಯ್ ಬೆಂಬಲಿಗರನ್ನು ದಾಸರಹಳ್ಳಿಗೆ ಕರೆತಂದಿದರು.ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಬಂದು ಟಿಕೇಟ್ ಅರ್ಜಿ ಸಲ್ಲಿಕೆ ಮಾಡಿದರು.
 
ಧನಂಜಯ್ ಬೆಂಬಲಿಗರ ಜಮಾವಣೆಯಿಂದ ಪೊಲೀಸರು ಸುಸ್ತಾಗಿದರು.ಕೆಪಿಸಿಸಿ ಕಂಟೋನ್ಮೆಂಟ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ನಿಂದ ಕೂಡಿತ್ತು.ದಾಸರಹಳ್ಳಿಯಿಂದ ಟಿಕೇಟ್ ಭರವಸೆ ಸಿಕ್ಕಿರುವ ಹಿನ್ನೆಲೆಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನನ್ನ ಧನಂಜಯ್ ಮಾಡಿದ್ರು.
 
ಕೆಪಿಸಿಸಿ ಟಿಕೇಟ್ ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನವಿರುವುದರಿಂದ ಬ್ಯಾಂಡು, ಜಾನಪದ ಕಲಾ ತಂಡಗಳು, ತಮಟೆ ವಾದ್ಯಗಳೊಂದಿಗೆ ಬಂದು ಟಿಕೇಟ್ ಆಕಾಂಕ್ಷಿ ಅರ್ಜಿ ಸಲ್ಲಿಸಿದರು.ಕೆಪಿಸಿಸಿ ಮುಂದೆ ಜನಜಾತ್ರೆ ನೋಡಿ  ಕಾಂಗ್ರೆಸ್ ನಾಯಕರು ದಂಗುಬಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ