ಡಿಕೆಶಿ ಆಪ್ತನಿಗೆ ಸಿಬಿಐ ಅಧಿಕಾರಿ ಕಪಾಳಮೋಕ್ಷ; ನಂಜಾವಧೂತ ಶ್ರೀಗಳ ಬಳಿ ಬೇಸರ ತೊಡಿಕೊಂಡ ಡಿಕೆಶಿ

ಮಂಗಳವಾರ, 6 ಅಕ್ಟೋಬರ್ 2020 (10:59 IST)
ಬೆಂಗಳೂರು : ಡಿಕೆಶಿ ಆಪ್ತನಿಗೆ ಸಿಬಿಐ ಅಧಿಕಾರಿ ಕಪಾಳಮೋಕ್ಷ ಮಾಡಿದ ಹಿನ್ನಲೆಯಲ್ಲಿ ನನ್ನ ಪಿಎ ಮೇಲೆ ಸಿಬಿಐ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ನಂಜಾವಧೂತ ಶ್ರೀಗಳ ಬಳಿ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಬ್ಬರು ಆಪ್ತರಿಗೆ ಸಿಬಿಐ ಅಧಿಕಾರಿ ಹೊಡೆದ್ರು. ನನ್ನ ತಾಯಿಗೂ ಕಿರುಕುಳ ನೀಡಿದ್ದಾರೆ. ಕೋರ್ಟ್ ನಿಂದ ತಡೆ ತಂದ್ರೂ ದಾಳಿ ಮಾಡಿದ್ರು. ಡಿಕೆ ಸುರೇಶ್ ಮನೆ ಮೇಲೂ ದಾಳಿ ಮಾಡಿದ್ರು. ಆಪ್ತ ಸಚಿನ್ ನಾರಾಯಣ್ ಮನೆ ಮೇಲೂ ದಾಳಿ. ದಾಳಿ ವೇಳೆ ಎಲ್ಲರಿಗೂ ಸಿಬಿಐ ಅಧಿಕಾರಿಗಳು  ಕಿರುಕುಳ ನೀಡಿದ್ದಾರೆ ಎಂದು ಶ್ರೀಗಳ ಜೊತೆ ಮಾತುಕತೆ ವೇಳೆ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ