ಸುಲಿಗೆಗೆ ಪ್ಲಾನ್ ಮಾಡಿದ್ದ ಆರು ಜನರನ್ನ ವಶಪಡೆದ ಸಿಸಿಬಿ ಪೊಲೀಸರು

ಮಂಗಳವಾರ, 2 ಜನವರಿ 2024 (14:00 IST)
ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಕೃತ್ಯಕ್ಕೆ ಪ್ಲಾನ್‌ ಹಾಕಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾರಕಾಸ್ತ್ರಗಳನ್ನ ಹಿಡಿದು ಆರು ಜನರು ಸುಲಿಗೆಗೆ ನಿಂತಿದ್ದರು.ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು.ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಬಂಧಿತರಿಂದ ಮಾರಕಾಸ್ತ್ರಗಳು, ಮೂರು ಬೈಕ್ ಗಳನ್ನ ಜಪ್ತಿ ಮಾಡಲಾಗಿದೆ.ಈ ಮುಂಚೆ ಆರೋಪಿಗಳ ವಿರುದ್ದ ಕೆ‌.ಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಡಕಾಯತಿ ಕೇಸ್ ದಾಖಲಾಗಿತ್ತು.ಸದ್ಯ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಲಾಗ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ