ಡಿಕೆ ಶಿವಕುಮಾರ್ ಬಿಡುಗಡೆಗೆ ಚಂಡಿಕಾ ಹೋಮ

ಸೋಮವಾರ, 9 ಸೆಪ್ಟಂಬರ್ 2019 (14:25 IST)
ಮಾಜಿ ಸಚಿವ ಡಿ ಕೆ ಶಿವಕುಮಾರ್ ಕೂಡಲೇ ಬಂಧನದಿಂದ ಹೊರಬರುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.

ಡಿ.ಕೆ.ಶಿವಕುಮಾರ್ ಇಡಿ ಬಂಧನದಿಂದ ಬೇಗ ಹೊರಬರಬೇಕು. ಹೀಗಂತ ಪ್ರಾರ್ಥಿಸಿ ಉಡುಪಿಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಚಂಡಿಕಾ ಹೋಮವನ್ನು ನೆರವೇರಿಸಲಾಗಿದೆ.

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನದಲ್ಲಿ ಇರೋದ್ರಿಂದ ಚಂಡಿಕಾ ಹೋಮ ನಡೆಸಲಾಗಿದ್ದು, ಇದ್ರಲ್ಲಿ ಡಿಕೆಶಿ ಕುಟುಂಬದವರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ರು.

ಈ ಹೋಮದ ಹರಕೆಯನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊತ್ತಿದ್ದರು ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ