ಎಚ್.ಡಿ.ದೇವೇಗೌಡರ ಸಮಾವೇಶಕ್ಕೆ ಚಲುವರಾಯ ಸ್ವಾಮಿ ಲೇವಡಿ

ಶುಕ್ರವಾರ, 1 ಜುಲೈ 2016 (14:26 IST)
ನಿನ್ನೆ ನಡೆದ ಜೆಡಿಎಸ್ ಸಮಾವೇಶ ರಾಜಕೀಯ ಸಮಾವೇಶವಾಗಿರಲಿಲ್ಲ. ತಾಲೂಕು ಸಮಾವೇಶವಾಗಿತ್ತು, ಬಾಯಿ ಚಪಲದವರು ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಚಲುವರಾಯ ಸ್ವಾಮಿ ಹೇಳಿದ್ದಾರೆ.
 
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ನಮ್ಮಿಂದ ಅನುಕೂಲವಾಗಿದೆ ಎನ್ನುವುದು ಮನರೆಯಬೇಡಿ. ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಅನ್ಯಾಯದ ಬಗ್ಗೆ ಅವರನ್ನೇ ಕೇಳಿ ಎಂದು ತಿರುಗೇಟು ನೀಡಿದರು.
 
ನಿನ್ನೆ ನಡೆದ ಸಮಾವೇಶಕ್ಕೆ ಹಣ ಕೊಟ್ಟು ಜನರನ್ನು ಕರೆತರಲಾಗಿತ್ತು. ತಾವಾಗಿಯೇ ಜನ ಬಂದಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಜೂನ್ 12 ರಿಂದ ಜೆಡಿಎಸ್‌ನಿಂದ ಅಮಾನತ್ತಿನಲ್ಲಿಟ್ಟಿದ್ದೀರಿ. ನಾನು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸಮಯಾವಕಾಶ ಬೇಕಾಗಿದೆ. ಪೂರ್ಣ ಪ್ರಮಾಣದ ಉತ್ತರ ನೀಡಲು ಮೂರು ತಿಂಗಳು ಕಾಲವಕಾಶ ಕೊಡಿ. ನಮ್ಮನ್ನು ಜೆಡಿಎಸ್‌ನಲ್ಲಿ ಉಳಿಸಿಕೊಳ್ಳಿ ಎಂದು ಕೇಳಿಕೊಳ್ಳುವುದಿಲ್ಲ  ಜೆಡಿಎಸ್ ವರಿಷ್ಠ ದೇವೇಗೌಜರಿಗೆ ಚೆಲುವರಾಯ ಸ್ವಾಮಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ