ಕಾಂಗ್ರೆಸ್, ಖರ್ಗೆ ವಿರುದ್ಧ ಚಿಂಚನಸೂರ ವಾಗ್ದಾಳಿ

ಮಂಗಳವಾರ, 16 ಅಕ್ಟೋಬರ್ 2018 (15:58 IST)
ಕಾಂಗ್ರೆಸ್ ನಿಂದ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ನನ್ನ ಸೋಲಿಸಿ ಅಂತ ಹೇಳಿದವರು ಈಗ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಯವರನ್ನು ಸೋಲಿಸಿ ಎಂದು ಹೇಳಬೇಕೆಂದು ಮಾಜಿ ಸಚಿವ ಹೇಳಿದ್ದಾರೆ.

ಕಾಂಗ್ರೆಸ್ ನಿಂದ ಗುರುಮಠಕಲ್ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದಾಗ ಕೆಲ ಕಾಂಗ್ರೆಸ್ ನಾಯಕರೇ ಚಿಂಚನಸೂರ ಅವರನ್ನು ಸೋಲಿಸಿ ಅಂತ ಹೇಳಿದ್ದರು. ಈಗ ಲೋಕಸಭಾ ಚುನಾವಣಾ ಹತ್ತಿರ ಬರುತ್ತಿದ್ದು ಆಗ ನನ್ನ ವಿರುದ್ಧ ಹೇಳಿದವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ‌ಸೋಲಿಸಬೇಕು ಅಂತ ಹೇಳಬೇಕೆಂದು ಕೈ ನಾಯಕರಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರು ಸವಾಲು ಹಾಕಿದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಹಮ್ಮಿಕೊಂಡ ಲೋಕಸಭಾ ಚುನಾವಣೆ ವಿಶೇಷ ಸಭೆಯಲ್ಲಿ ಭಾಗವಹಿಸಿ ಚಿಂಚನಸೂರ ಮಾತನಾಡಿದರು. ನಾನು ದೀಪದಂತೆ ನನ್ನ ಮೈಯಿ ಸುಟ್ಟುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಿ ಬೆಳಕು ನೀಡುವ ಕೆಲಸ ಮಾಡಿದ್ದೇನೆ ಎಂದರು. ಮೈತ್ರಿ ಸರಕಾರ ಶೀಘ್ರ ಪತನವಾಗಲಿದ್ದು ಯಾದಗಿರಿ ಬಿಜೆಪಿ ಶಾಸಕ ಶೀಘ್ರ ಸಚಿವರಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ