ಚುನಾವಣೆಗೆ ತನ್ನನ್ನು ಆಯ್ಕೆ ಮಾಡಿದ ಕಾಂಗ್ರೆಸ್ ನಾಯಕರಿಗೆ ಚಿರಋಣಿ ಎಂದ ವಿ.ಎಸ್.ಉಗ್ರಪ್ಪ

ಮಂಗಳವಾರ, 16 ಅಕ್ಟೋಬರ್ 2018 (13:33 IST)
ಬಳ್ಳಾರಿ : ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ವಿ.ಎಸ್.ಉಗ್ರಪ್ಪ ಅವರು ತಮ್ಮನ್ನು ಆಯ್ಕೆ ಮಾಡಿದ ಕಾಂಗ್ರೆಸ್ ನಾಯಕರಿಗೆ ಋಣಿಯಾಗಿದ್ದೇನೆ ಎಂದು ಹೇಳುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನನ್ನು ಆಯ್ಕೆ ಮಾಡಿದ ನಾಯಕರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.


ಹಾಗೇ ಬಳ್ಳಾರಿ ಜನರ ಕುರಿತು ಮಾತನಾಡಿದ ಅವರು, ನಾನು ನಿಮ್ಮ ಮಗ, ನಿಮ್ಮ ಅಣ್ಣ ತಮ್ಮನೆಂದು ಭಾವಿಸಿ ನನ್ನನ್ನು ಆಶೀರ್ವದಿಸಿ. ವಾಲ್ಮೀಕಿ ಸಮಾಜದ ಎಲ್ಲಾ ಹಿತಾಸಕ್ತಿ ಕಾಪಡುವ ಕೆಲಸ ಮಾಡಿದ್ದೇನೆ. ಹೋರಾಟ ಮಾಡೋದ್ರಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ. ನಾನು ಪ್ರಾಮಾಣಿಕತೆಯನ್ನು ನೂರಕ್ಕೆ ನೂರರಷ್ಟು ಹಿಂಬಾಲಿಸಿಕೊಂಡು ಬಂದಿದ್ದೇನೆ. ಹಿಂಸೆ ಗಲಾಟೆಗೆ ಎಂದೂ ಅವಕಾಶ ಕೊಟ್ಟಿಲ್ಲ. ಪ್ರಚೋದನೆ ಕೊಟ್ಟಿಲ್ಲ. ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ