ಕಬಿನಿ ಹಿನ್ನೀರಿನ ರೆಸಾರ್ಟ್ ನಲ್ಲಿ ಸಿಎಂ ಕುಮಾರಸ್ವಾಮಿ ವಿಶ್ರಾಂತಿ

ಭಾನುವಾರ, 11 ನವೆಂಬರ್ 2018 (18:44 IST)
ಕಬಿನಿ ಹಿನ್ನೀರಿನ ರೆಸಾರ್ಟ್ ನಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಸಿಎಂಗೆ ಚಿಕಿತ್ಸೆ ನೀಡಲು ಏಳು ಮಂದಿ ವೈದ್ಯರ ತಂಡ ರೆಸಾರ್ಟ್ ಗೆ ಆಗಮಿಸಿದ್ದರು.

ಕುಟುಂಬ ಸಮೇತರಾಗಿ ಆರೇಂಜ್ ಕೌಂಟಿ ರೆಸಾರ್ಟ್ ನಲ್ಲಿ ಸಿಎಂ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ವಿಶ್ರಾಂತಿ ಪಡೆಯುತ್ತಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ ರೆಸಾರ್ಟನಲ್ಲಿದ್ದಾರೆ.

 ಹೆಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಇರುವ   ಆರೇಂಜ್ ಕೌಂಟಿ  ರೆಸಾರ್ಟ ಇದಾಗಿದೆ.  ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದಾರೆ.

ಬೆಳ್ಳಿಗೆ ನಿಖಿಲ್ ಕುಮಾರಸ್ವಾಮಿ ದೋಣಿಯಲ್ಲಿ ಕಬಿನಿ ಹಿನ್ನಿರಿನ ಮೂಲಕ ದಮ್ಮನಕಟ್ಟೆ ಯಲ್ಲಿ ಸಫಾರಿ ನಡೆಸಿದರು.
ಸಚಿವ ಸಾ.ರಾ.ಮಹೇಶ ರಾತ್ರಿ ರೆಸಾರ್ಟ್‌ಗೆ ಭೇಟಿ ನೀಡಿ  ಮುಖ್ಯಮಂತ್ರಿ ಕುಮಾರಸ್ವಾಮಿರವರನ್ನು ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಿದರು.

ಆರೋಗ್ಯದಲ್ಲಿ ಏರುಪೇರು ಇರುವುದರಿಂದ ಏಳಕ್ಕೂ ಹೆಚ್ಚು ವೈದ್ಯರು ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿ ಸಿಎಂಗೆ ಚಿಕಿತ್ಸೆ ನೀಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ