ಆದರೆ ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಇದಕ್ಕೂ ಕುಂಬಮೇಳಕ್ಕೂ ಯಾಕೆ ಹೋಲಿಕೆ ಮಾಡುತ್ತೀರಿ? ಆಗಲೂ ನಿಮ್ಮದೇ ಪಕ್ಷದ ನಾಯಕರು ಸಾಕಷ್ಟು ಟೀಕೆ ಮಾಡಿದ್ದರು. ನಿಮಗೆ ಸಾವಿರಾರು ಜನ ಸೇರುವ ಒಂದು ದಿನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಆಗಿಲ್ಲ. ಹಾಗಿರುವಾಗ ಉತ್ತರ ಪ್ರದೇಶದಲ್ಲಿ ದಿನಗಟ್ಟಲೆ ಕೋಟ್ಯಾಂತರ ಜನ ಬರುವ ಕಾರ್ಯಕ್ರಮದಲ್ಲಿ ಅವ್ಯವಸ್ಥೆಗಳು ಆಗುವುದು ಸಹಜವಲ್ಲವೇ? ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಟೀಕೆ ಮಾಡಿದ್ದಾರೆ.