ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್

Krishnaveni K

ಗುರುವಾರ, 5 ಜೂನ್ 2025 (10:14 IST)
ಬೆಂಗಳೂರು: ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸುವಾಗ ಕುಂಬಮೇಳದಲ್ಲೂ ಆಗಿರ್ಲಿಲ್ವಾಅ ಎಂದಿದ್ದರು. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ನೀವೂ ಟೀಕಿಸಿರಲಿಲ್ವಾ ಎಂದಿದ್ದಾರೆ.

ನಿನ್ನೆ ಚಿನ್ನಸ್ವಾಮಿಯಲ್ಲಿ ಸಂಭ್ರಮಾಚರಣೆ ವೇಳೆ ಅವ್ಯವಸ್ಥೆಯಿಂದಾಗಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗೋಷ್ಠಿ ನಡೆಸಿದ್ದರು. ಈ ವೇಳೆ ಕಾಲ್ತುಳಿತ ದುರಂತದ ಬಗ್ಗೆ ಕಾರಣ ವಿವರಿಸಿದ್ದಾರೆ.

ಈ ವೇಳೆ ಇತ್ತೀಚೆಗೆ ಕುಂಬಮೇಳದಲ್ಲಿ ದುರಂತವಾಗಿಲ್ವಾ? ಕಾಲ್ತುಳಿತದಲ್ಲಿ ಜನ ಸಾವನ್ನಪ್ಪಿಲ್ವಾ? ಇದನ್ನು ನಾವು ಅಥವಾ ನಮ್ಮ ಪಕ್ಷದವರು ಏನಾದರೂ ಟೀಕೆ ಮಾಡಿದ್ವಾ ಎಂದು ಸಿದ್ದರಾಮಯ್ಯ ಪತ್ರಕರ್ತರಿಗೆ ತಿರುಗೇಟು ನೀಡಿದ್ದಾರೆ.

ಆದರೆ ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಇದಕ್ಕೂ ಕುಂಬಮೇಳಕ್ಕೂ ಯಾಕೆ ಹೋಲಿಕೆ ಮಾಡುತ್ತೀರಿ? ಆಗಲೂ ನಿಮ್ಮದೇ ಪಕ್ಷದ ನಾಯಕರು ಸಾಕಷ್ಟು ಟೀಕೆ ಮಾಡಿದ್ದರು. ನಿಮಗೆ ಸಾವಿರಾರು ಜನ ಸೇರುವ ಒಂದು ದಿನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಆಗಿಲ್ಲ. ಹಾಗಿರುವಾಗ ಉತ್ತರ ಪ್ರದೇಶದಲ್ಲಿ ದಿನಗಟ್ಟಲೆ ಕೋಟ್ಯಾಂತರ ಜನ ಬರುವ ಕಾರ್ಯಕ್ರಮದಲ್ಲಿ ಅವ್ಯವಸ್ಥೆಗಳು ಆಗುವುದು ಸಹಜವಲ್ಲವೇ? ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ