ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ಪೊಲೀಸರಲ್ಲ, ಈ ಎರಡು ವಿಚಾರಗಳು ಎಂಬುದು ಈಗ ಬಯಲಾಗುತ್ತಿದೆ.
ಉಚಿತ ಪ್ರವೇಶ
ಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನೋಡಲು ಹೋಗಬೇಕೆಂದರೆ ಟಿಕೆಟ್ ದರ ದುಬಾರಿಯಿರುತ್ತದೆ. ಆದರೆ ಈಗ ಆಟಗಾರರ ಸಂಭ್ರಮಾಚರಣೆಗೆ ಉಚಿತವಾಗಿ ಪ್ರವೇಶ ನೀಡಲಾಗುವುದು ಎಂದು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲೇ ಪ್ರಕಟವಾಗಿತ್ತು. ಯಾವಾಗ ಉಚಿತ ಪ್ರವೇಶ ಎಂದು ಗೊತ್ತಾಯಿತೋ ಲಕ್ಷಾಂತರ ಜನ ಮೈದಾನಕ್ಕೆ ಲಗ್ಗೆಯಿಟ್ಟಿದ್ದರು. ಇದೇ ಕಾರಣಕ್ಕೆ 35 ಸಾವಿರ ಜನರ ಸಾಮರ್ಥ್ಯದ ಮೈದಾನಕ್ಕೆ ಲಕ್ಷಾಂತರ ಜನ ಬಂದಿದ್ದರು. ಇದೇ ಪ್ರಮುಖ ಕಾರಣ.