ಮೈಲಾರಿ ಹೋಟೆಲ್ ನಲ್ಲಿ ಸಾಮಾನ್ಯರಂತೆ ತಿಂಡಿ ಸವಿದ ಸಿದ್ದರಾಮಯ್ಯ

Krishnaveni K

ಸೋಮವಾರ, 29 ಜುಲೈ 2024 (14:19 IST)
ಮೈಸೂರು: ಇಂದು ಕೆಆರ್ ಎಸ್ ಗೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದ ಸಿಎಂ ಸಿದ್ದರಾಮಯ್ಯ ತಮ್ಮ ಮೆಚ್ಚಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ಸವಿದಿದ್ದಾರೆ.

ಭಾರೀ ಮಳೆಯಿಂದಾಗಿ ಕೆಆರ್ ಎಸ್ ಡ್ಯಾಮ್ ಭರ್ತಿಯಾದ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಸಂಪ್ರದಾಯದಂತೆ ಬಾಗಿನ ಅರ್ಪಿಸಲು ಬಂದಿದ್ದರು. ತಮ್ಮ ಸಂಗಡಿಗರೊಂದಿಗೆ ಕೆಆರ್ ಎಸ್ ಗೆ ತೆರಳುವ ದಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಮೈಲಾರಿ ಹೋಟೆಲ್ ಇಡ್ಲಿ ಸವಿದರು.

ಸಾಮಾನ್ಯರಂತೇ ಬೆಂಚ್ ನಲ್ಲಿ ಕುಳಿತು ಬಾಳೆ ಎಲೆಯಲ್ಲಿ ತಿಂಡಿ ಸವಿದ ಸಿದ್ದರಾಮಯ್ಯ ಬಳಿಕ ಕೆಆರ್ ಎಸ್ ಗೆ ತೆರಳಿದರು. ಇದಕ್ಕೆ ಮೊದಲು ಕಾವೇರಿ ತಾಯಿಗೆ ಪೂಜೆ ಸಲ್ಲಿಸಿದ್ದ ಸಿದ್ದರಾಮಯ್ಯ ಬಳಿಕ ಬಾಗಿನ ಅರ್ಪಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಸಾಥ್ ನೀಡಿದ್ದರು.

ಇದು ಮೂರನೇ ಬಾರಿಗೆ ಸಿಎಂ ಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಸಚಿವರಾದ ಚೆಲುವರಾಯಸ್ವಾಮಿ, ಎಚ್ ಸಿ ಮಹದೇವಪ್ಪ ಮೊದಲಾದವರು ಸಿಎಂ ಜೊತೆಗಿದ್ದರು. ಮೊದಲೇ ಸಿದ್ಧ ಮಾಡಿಟ್ಟಿದ್ದ ಬಾಗಿನಗಳಿಗೆ ಹೂ ಹಾಕಿ ಕೈ ಮುಗಿದು ಬಳಿಕ ಕಾವೇರಿ ತಾಯಿಗೆ ಅರ್ಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ