ಸಿಎಂ ಸಿದ್ದರಾಮಯ್ಯ ಪಲಾಯನವಾದಿ: ಜಗದೀಶ್ ಶೆಟ್ಟರ್

ಮಂಗಳವಾರ, 24 ಏಪ್ರಿಲ್ 2018 (17:12 IST)
ಸಿದ್ದರಾಮಯ್ಯ ಓರ್ವ ಪಲಾಯನವಾದಿಯಾಗಿದ್ದಾರೆ. ಮೈಸೂರಿನಲ್ಲಿ ಸೋಲುವ ಭಯದಿಂದ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಬಾದಾಮಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. 
ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿನೂ ಆಶೀರ್ವಾದ ಮಾಡೋದಿಲ್ಲ. ಬನಶಂಕರಿ ದೇವಿಯೂ ಆಶೀರ್ವಾದ ಮಾಡೋದಿಲ್ಲ ಎಂದು ಟಾಂಗ್ ನೀಡಿದ್ದಾರೆ.
 
ಸಿಎಂಗೆ ಬಾದಾಮಿ, ಗೋಡಂಬಿ, ದ್ರಾಕ್ಷಿ ಏನೂ ಸಿಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 
 
ಸಿಎಂ ಸಿದ್ದರಾಮಯ್ಯಗೆ ಈ ವಿಧಾನಸಭೆ ಚುನಾವಣೆ ಅಧೋಗತಿಗೆ ತರಲಿದೆ. ಅದನ್ನು ಅವರೆ ತಿಳಿದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ