ಮಾನವೀಯತೆ ಮೆರೆದ ಸಿಎಂ ಸಿದ್ಧರಾಮಯ್ಯ

ಸೋಮವಾರ, 22 ಮೇ 2017 (08:41 IST)
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಕೆಲವೊಮ್ಮೆ ಅಪರೂಪದ ಕಾರಣಕ್ಕೆ ಸುದ್ದಿಯಾಗುತ್ತಾರೆ. ಇದೀಗ ತಮ್ಮ ಮೇಲಿದ್ದ ಅಪವಾದವೊಂದನ್ನು ತೊಡೆದು ಹಾಕಿದ್ದಲ್ಲದೆ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 
ಹೆಚ್ಎಎಲ್ ಗೆ ಹೋಗಿ ತಮ್ಮ ಕಚೇರಿ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಎಂದಿನಂತೆ ಸಿಎಂಗಾಗಿ ರಸ್ತೆ ತೆರವುಗೊಳಿಸಲಾಗಿತ್ತು. ಆದರೆ ಇದರಿಂದ ಆಂಬ್ಯುಲೆನ್ಸ್ ಒಂದರಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಆದರೆ ಸಿಎಂ ತಮ್ಮ ಬೆಂಗಾವಲು ಪಡೆ ಪೊಲೀಸರಿಗೆ ಆಂಬ್ಯುಲೆನ್ಸ್ ತೆರಳಲು ಅನುವು ಮಾಡಿಕೊಡುವಂತೆ ಆದೇಶಿಸಿದರು. ಅದರಂತೆ ನಡೆದುಕೊಂಡ ಪೊಲೀಸರ ವರ್ತನೆಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದೊಮ್ಮೆ ಇದೇ ಬೆಂಗಳೂರಿನಲ್ಲಿ ಸಿಎಂ ಬೆಂಗಾವಲು ಪಡೆಗಳು, ಆಂಬ್ಯುಲೆನ್ಸ್ ತಡೆ ಹಿಡಿದು ಟೀಕೆಗೆ ಗುರಿಯಾಗಿತ್ತು. ಇದೀಗ ಸಿಎಂ ಸಿದ್ಧು ಆ ಅಪವಾದ ತೊಡೆದುಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ