ಈಶ್ವರಪ್ಪನನ್ನು ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ಧರಾಮಯ್ಯ

ಸೋಮವಾರ, 3 ಏಪ್ರಿಲ್ 2017 (10:35 IST)
ಬೆಂಗಳೂರು: ಚುನಾವಣೆ ಕಾವೇರುತ್ತಿದ್ದರೆ, ರಾಜಕೀಯ ನಾಯಕರ ಮಾತು ಎಲ್ಲೆ ಮೀರುವುದು ವಿಶೇಷವೇನಲ್ಲ. ಇದೀಗ ಸಿಎಂ ಸಿದ್ಧರಾಮಯ್ಯ ವಿಪಕ್ಷ ನಾಯಕ ಈಶ್ವರಪ್ಪ ವಿರುದ್ಧ ಏಕವಚನ ಪ್ರಯೋಗ ನಡೆಸಿದ್ದಾರೆ.

 

ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆ ಪ್ರಚಾರಕ್ಕಿಳಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ನಾಯಕರ ವಿರುದ್ಧ ಏಕವಚನದ ಪ್ರಯೋಗ ನಡೆಸಿದ್ದಾರೆ.

 
ಯಡಿಯೂರಪ್ಪನ ಕಂಡ್ರೆ ಈಶ್ವರಪ್ಪಗೆ ಆಗಿರಬರಲ್ಲ. ಯಡಿಯೂರಪ್ಪನ ಕಂಡ್ರೇ ಅವನಿಗೆ ಆಗಿ ಬರಲ್ಲ. ಇನ್ನು ಕಾಂಗ್ರೆಸ್ ಬಗ್ಗೆ ಕಿಡಿಕಾರುವುದು ಸಹಜ ಎಂದು ಹಗುರವಾಗಿ ಮಾತನಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ