ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಸಂಸ್ಥೆ ದೇಶದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿದೆ. ಸಾರಿಗೆ ವಲಯದಲ್ಲಿ ಉತ್ತಮ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಕ್ಕೆಲ್ಲಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಪರಿಶ್ರಮ ಕಾರಣ ಎಂದು ಹೇಳಿದರು.
ಈ ಹಿಂದೆ ಸಾರಿಗೆ ನೌಕರರ ವೇತನವನ್ನು 10 ರಷ್ಟು ಯಾರು ನೀಡಿಲ್ಲ. ಆದರೆ, ಈ ಬಾರಿ ನೌಕರರ ವೇತನ ಪರಿಷ್ಕರಣೆಯಲ್ಲಿ 12.5 ರಷ್ಟು ಹೆಚ್ಚಿಸಲಾಗಿದೆ. ಸಾರಿಗೆ ನೌಕರರ ವೇತನವನ್ನು ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.