ಸಚಿವ ಸ್ಥಾನಕ್ಕಾಗಿ ಲಾಭಿ: ಶಾಸಕ ಪುಟ್ಟರಂಗ ಶೆಟ್ಟಿ ಬೆಂಬಲಿಗರಿಗೆ ಸಿಎಂ ತರಾಟೆ

ಮಂಗಳವಾರ, 10 ಜನವರಿ 2017 (12:42 IST)
ಸಚಿವ ಸ್ಥಾನಕ್ಕಾಗಿ ಲಾಭಿ ಸಡೆಸಲು ಬಂದ ಶಾಸಕ ಪುಟ್ಟರಂಗ ಶೆಟ್ಟಿ ಬೆಂಬಲಿಗರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಎಚ್.ವೈ.ಮೇಟಿ ರಾಜೀನಾಮೆಯಿಂದ ತೆರುವಾಗಿರುವ ಸಚಿವ ಸ್ಥಾನವನ್ನು ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಉಪ್ಪಾರ ಸಮುದಾಯದವರು ಹಾಗೂ ಕಾರ್ಯಕರ್ತರು ಸಿಎಂ ಗೃಹ ಕಚೇರಿಗೆ ಆಗಮಿಸಿದ್ದರು. ಶಾಸಕರ ಪರ ಘೋಷಣೆ ಕೂಗಿ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟರು. 
 
ಹಿಂದುಳಿದ ಜಾತಿಗೆ ಸೇರಿದ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ರಫೀ ಒತ್ತಾಯಿಸಿದರು.
 
ಮೊದಲು ಉಪಚುನಾವಣೆ ಕಡೆ ಗಮನ ನೀಡಿ. ಅದನ್ನು ಬಿಟ್ಟು ಸಚಿವ ಸ್ಥಾನ ನೀಡುವಂತೆ ಈ ರೀತಿ ಒತ್ತಡ ತರುವುದು ಸರಿಯಲ್ಲ. ಈಗ ಜಿಲ್ಲೆಯ ಕಡೆ ನಡೆಯಿರಿ ಸಾಕು ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ