ಗೆಲುವಿನ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ನಿಂದ ಜೈ ಬಜರಂಗಬಲಿ ಘೋಷಣೆ

ಶನಿವಾರ, 13 ಮೇ 2023 (18:09 IST)
Photo Courtesy: Twitter
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಗೆಲುವು ಕಾಂಗ್ರೆಸ್ ಉತ್ಸಾಹವನ್ನು ಹೆಚ್ಚು ಮಾಡಿದೆ.

ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಂತಹ ಪ್ರಮುಖ ರಾಜ್ಯದಲ್ಲಿ ಸಿಕ್ಕ ಗೆಲುವು ಕಾಂಗ್ರೆಸ್ ಶಕ್ತಿ ಹೆಚ್ಚು ಮಾಡುವುದು ಖಂಡಿತಾ. ಇದು ಸ್ಥಳೀಯ ನಾಯಕತ್ವದ ಮೇಲೆ ನಂಬಿಕೆಯಿಟ್ಟು ಜನತೆ ನೀಡಿದ ತೀರ್ಪು ಎಂದರೂ ತಪ್ಪಾಗಲಾರದು.

ಈ ಭರ್ಜರಿ ಗೆಲುವಿನ ಖುಷಿಯನ್ನು ಕಾಂಗ್ರೆಸ್ ದೆಹಲಿಯ ಕಚೇರಿಯಲ್ಲಿ ಸಂಭ್ರಮಿಸಿದೆ. ಈ ವೇಳೆ ಪಕ್ಷದ ಕಾರ್ಯಕರ್ತರು ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗಿ ಸಂಭ್ರಮಾಚರಿಸಿದ್ದಾರೆ. ವಿಶೇಷವೆಂದರೆ ಇದೇ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಆದರೆ ಈಗ ಕಾಂಗ್ರೆಸ್ ಚುನಾವಣಾ ಪೂರ್ವ ಮಾಡಿದ ಡ್ಯಾಮೇಜ್ ಕಂಟ್ರೋಲ್ ಮಾಡುವ ಮೂಲಕ ತಾನು ಹಿಂದೂ ವಿರೋಧಿಯಲ್ಲ ಎಂದು ಪರೋಕ್ಷವಾಗಿ ಸಂದೇಶ ಸಾರಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ