ಕಾಂಗ್ರೆಸ್ ನವರು ಜವಾಬ್ದಾರಿ ವಿಪಕ್ಷದಂತೆ ನಡೆದುಕೊಳ್ತಿಲ್ಲ- ವಿಜಯೇಂದ್ರ ಕಿಡಿ

ಬುಧವಾರ, 19 ಆಗಸ್ಟ್ 2020 (11:16 IST)
ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಗ್ಧರನ್ನ ಬಂಧಿಸಬೇಡಿ ಎಂದು  ಮನವಿ ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ  ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ , ಕಾಂಗ್ರೆಸ್ ನವರು ಜವಾಬ್ದಾರಿ ವಿಪಕ್ಷದಂತೆ ನಡೆದುಕೊಳ್ತಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಳ್ತಾರೆ. ಅಮಾಯಕರನ್ನು ಬಿಟ್ಟುಬಿಡಿ ಎನ್ನುತ್ತಿರಾ. ನಿಮ್ಮ ನಡೆ ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ