ಕಾಂಗ್ರೆಸ್​​ ಬಾಲಗ್ರಹ ಪೀಡಿತವಾಗಿದೆ

ಗುರುವಾರ, 18 ಮೇ 2023 (14:40 IST)
ಹಂಗಾಮಿ ಸಿಎಂ ಬಸವರಾಜ್​​​​​​ ಬೊಮ್ಮಾಯಿಯವರನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ರು. ಬೆಂಗಳೂರಿನ ಆರ್​​.ಟಿ ನಗರದಲ್ಲಿ ಸಿಎಂ ಬಸವರಾಜ್​​ ಬೊಮ್ಮಾಯಿಯನ್ನು ಭೇಟಿಯಾಗಿ ಮಾತನಾಡಿದ್ರು. ಬಳಿಕ ಮಾತನಾಡಿದ ಅವರು, ಮಾಜಿ ಸಚಿವ ಡಾ. ಕೆ. ಸುಧಾಕರ್, ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಅದನ್ನು ಸುಧಾಕರ್ ಅವರೇ ಹೇಳಬೇಕು.. ಇದರ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಬಾಲಗ್ರಹ ಪೀಡಿತವಾಗಿದೆ ಎಂದು ಹೇಳಿದ್ರು. ಕಾಂಗ್ರೆಸ್​​ನಲ್ಲಿ ಸಿಎಂ ಯಾರಾಗ್ತಾರೆ ನೋಡೋಣ.. ಯಾರು ಸಿಎಂ ಆಗ್ತಾರೆ ಅನ್ನೋದರ ಮೇಲೆ ನಾವು ಸ್ಟ್ರಾಟರ್ಜಿ ಮಾಡ್ತೇವೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ