ಬಣ್ಣ ಮಾಡಿಸಿದ್ದ ಜಾಹಿರಾತಿಗೆ 40% ಎಂದು ಬರೆದು ಕಿಚಾಯಿಸಿದ ಕಾಂಗ್ರೆಸ್

ಬುಧವಾರ, 15 ಫೆಬ್ರವರಿ 2023 (15:39 IST)
ಚುನಾವಣಾ ಪ್ರಚಾರಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದೆಲ್ಲೆಡೆ "ಬಿಜೆಪಿಯೇ ಭರವಸೆ" ಎಂಬ ಘೋಷಣೆಯಡಿ ಪೈಟಿಂಗ್ ಬಣ್ಣ ಮಾಡಿಸಿದ್ದ ಜಾಹಿರಾತಿಗೆ 40% ಎಂದು ಬರೆದು ಕಾಂಗ್ರೆಸ್ ಕಿಚಾಯಿಸಿದೆ.
 
ಡಿಕೆಶಿ,‌ ಸಿದ್ದರಾಮಯ್ಯ, ಸುರ್ಜೇವಾಲ ಜಂಟಿ ನಾಯಕರ ಮಾಧ್ಯಮಗೊಷ್ಠಿ ಬೆನ್ನಲ್ಲೇ ಸಚಿವ ಮುನಿರತ್ನಗೆ ಇರಿಸು ಮುರಿಸನ್ನ ರಾಜರಾಜೇಶ್ವರಿನಗರ ಕಾಂಗ್ರೆಸ್‌ ಕಾರ್ಯಕರ್ತರು ತಂದಿದ್ದಾರೆ.
 
ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ ಮಾಡ್ತಿದ್ದು,ಬಿಜೆಪಿ ಜಾಹಿರಾತಿನ ಮೇಲೆ  40% ಬರಹಗಳು ಕಣ್ಣಿಗೆ ರಾಚುತ್ತಿದೆ.ಜಾಹಿರಾತಿನ ಮೇಲೆ 40% ಬರಹ ಕಂಡು ಬಿಬಿಎಂಪಿ ಅಧಿಕಾರಿಗಳ‌ ಮೇಲೆ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕೆಂಡಾಮಂಡಲರಾಗಿದ್ದಾರೆ.ಸಾರ್ವಜನಿಕರ ಮುಂದೆ ಇರಿಸು-ಮುರಿಸು ತಪ್ಪಿಸಿಕೊಳ್ಳಲು ಬಿಬಿಎಂಪಿ ನೌಕರರಿಂದ ಪೂರ್ತಿ ಜಾಹಿರಾತನ್ನೇ  ಬಿಜೆಪಿ ಶಾಸಕ ಮುನಿರತ್ನ ತೆಗೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ