ತುಮಕೂರಿನಲ್ಲಿ ಮುಂದುವರಿದ ಚುನಾವಣೆ ಘರ್ಷಣೆ

ಮಂಗಳವಾರ, 26 ಜೂನ್ 2018 (22:39 IST)
ಮಳೆ ನಿಂತರೂ ಮಳೆ ಹನಿ ಬೇಗ ನಿಲ್ಲುವುದಿಲ್ಲ ಎನ್ನುವ ಹಾಗೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಮುಗಿದರೂ ಚುನಾವಣೋತ್ತರ ಘರ್ಷಣೆಗಳು ಅಲ್ಲಲ್ಲಿ ಮರುಕಳಿಸುತ್ತಲೇ ಇವೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಚುನಾವಣಾ ರಾಜಕೀಯ ದ್ವೇಷ ಈಗಲೂ ಬೂದಿಮುಚ್ಚಿದ ಕೆಂಡದಂತಿದೆ. ಈ ದ್ವೇಷಕ್ಕೆ ಬೋರ್ ವೆಲ್, ಕೇಬಲ್ ನಾಶಪಡಿಸಲಾಗಿದೆ. ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಕೆ.ಎಸ್.ರೆಡ್ಡಿ ಎಂಬುವರ ಜಮೀನಿನಲ್ಲಿ ದುರುಳರು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿರುವ ದಾಳಿಂಬೆ, ಶ್ರೀಗಂಧ ಸಸಿಗಳೂ ಕೂಡ ನಾಶವಾಗಿವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪರವಾಗಿ ರೈತ ಕೆ.ಎಸ್.ರೆಡ್ಡಿ ಕೆಲಸ ಮಾಡಿದ್ದರು.

ನಾಗಲಮಡಿಕೆ ಗ್ರಾಮದ ಸುತ್ತ ಈ ರೈತ ಪ್ರಭಾವ ಹೊಂದಿದ್ದರು. ಹೀಗಾಗಿ ರಾಜಕೀಯ ದ್ವೇಷದ ಕಾರಣ ಇವರ ಜಮೀನಿನಲ್ಲಿರುವ ಬೋರ್ ವೆಲ್ ನಾಶವಾಗಿದೆ. ಈ ಕುರಿತು ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ