ಖಾತೆ ಹಂಚಿಕೆಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಕಿತ್ತಾಟ

ಸೋಮವಾರ, 28 ಮೇ 2018 (14:38 IST)
ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹುಮತದೊಂದಿಗೆ  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ  ನೇತೃತ್ವದಲ್ಲಿ ಸಂಮ್ಮಿಶ್ರ ಸರ್ಕಾರ ನಿರ್ಮಾಣವಾಗಿದ್ದು, ಇದೀಗ ಪ್ರಮುಖ ಖಾತೆ ಹಂಚಿಕೆಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಕಿತ್ತಾಟ ಶುರವಾಗಿದೆ.


ಜೆಡಿಎಸ್-ಕಾಂಗ್ರೆಸ್ ಖಾತೆ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ  ಹಣಕಾಸು, ಜಲಸಂಪನ್ಮೂಲ, ಲೋಕೋಪಯೋಗಿ ಇಂಧನ ಇಲಾಖೆ ತಮಗೆ ನೀಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ ಎಂಬುದಾಗಿ ತಿಳಿದುಬಂದಿದೆ. ಒಂದುವೇಳೆ ಇಂಧನ ಇಲಾಖೆಯನ್ನ ಕಾಂಗ್ರೆಸ್ ಗೆ ಬಿಟ್ಟುಕೊಟ್ಟರೂ ಕೂಡ ಜಲಸಂಪನ್ಮೂಲ ಇಲಾಖೆ ನೀಡಲು ಸಾಧ್ಯವಿಲ್ಲ ಎಂದು , ಹಾಗೇ ಹಣಕಾಸು ಖಾತೆ ಇಲ್ಲದ ಸಿಎಂ ಹುದ್ದೆ ನಿಷ್ಪ್ರಯೋಜಕ ಎಂದು ಜೆಡಿಎಸ್ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ