ಕೊರೊನಾ ಆತಂಕ : ಪ್ರಖ್ಯಾತ ಕಾಲಭೈರವೇಶ್ವರ ಜಾತ್ರೆ ರದ್ದು

ಸೋಮವಾರ, 23 ಮಾರ್ಚ್ 2020 (18:25 IST)
ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಪ್ರಖ್ಯಾತ ಕಾಲಭೈರವೇಶ್ವರ ಜಾತ್ರೆ ರದ್ದುಗೊಂಡಿದೆ.

ಪ್ರತಿವರ್ಷ ಸಹಸ್ರಾರು ಭಕ್ತರು ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ವ್ಯಾಪ್ತಿಯ ಶ್ರೀ ಕಾಲಭೈರವೇಶ್ವರ ಜಾತ್ರೆ ಹಾಗೂ ಬೋರೆದೇವರು ಕೊಂಡದಲ್ಲಿ ಪಾಲ್ಗೊಳ್ಳುತ್ತಿದ್ದರು.

ಕೊರೊನಾ ವೈರಸ್ ಭೀತಿಯಿಂದಾಗಿ ಊರಿನ ಜಾತ್ರೆ ನಡೆಸೋದನ್ನು ಅಲ್ಲಿನ ಜನರು ಕೈಬಿಟ್ಟಿದ್ದಾರೆ.
ದೂರದ ಊರುಗಳಿಂದ ಬೆರಳಣಿಯಷ್ಟು ಭಕ್ತರು ಆಗಮಿಸಿ ದೂರದಿಂದಲೇ ದೇವರ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಚಿತ್ರಣ ಕಂಡು ಬಂದಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ